Tuesday, January 16, 2007

ಅಲ್ಪ

Trying to revive the blog - ಸುಮಾರು ಒಂದೂವರೆ ವರ್ಷದ ಹಿಂದೆ ಬರೆದ ಒಂದು ಕವನ -

ಅಲ್ಪ

ನಾನು! ಎರಡಕ್ಷರಗಳಲ್ಲಿ ಅದೆಷ್ಟು ದರ್ಪ
ನಾನೇ ದೊಡ್ಡವ, ನನ್ನಿಂದಲೇ ಸರ್ವಸ್ವ
ಎಂಬ ಒಣಪ್ರತಿಷ್ಠೆ, ಹಮ್ಮು-ಬಿಮ್ಮು
ಆದರೆ,

ಬೆಳುಗುಳದ ಗೊಮ್ಮಟನ ಮುಂದೆ
ಹಮ್ಮು-ಬಿಮ್ಮುಗಳು ಬೆಟ್ಟದಿಂದುರುಳುತ್ತವೆ
ಒಣಪ್ರತಿಷ್ಠೆ ಸಮಿತ್ತಿನಂತೆ ಉರಿಯುತ್ತದೆ
ತ್ಯಾಗಮೂರ್ತಿಯ ಮುಂದೆ ಬೆತ್ತಲಾಗಿ ನಿಲ್ಲುವನು

ತನಗೆಲ್ಲಾ ಗೊತ್ತೆನುವ ಮನುಜನಿಗೆ
ರತ್ನಗರ್ಭಾ ವಸುಂಧರಳದು ಮೌನ ಸವಾಲು
ಅನ್ನ ಕೊಟ್ಟ ತಾಯಿಯ ಋಣಮರೆತು ಕುಣಿಯುವನು
ಆಕೆಯೊಮ್ಮೆ ಮೈಕೊಡವಿದೊಡೆ ಸದ್ದಿಲ್ಲದೆ ಮಲಗುವನು

ಕಡಲ ತೀರದಿ ಕಣ್ಣರಳಿಸಿ ನಿಂತಾಗ, ಅಲೆಗಳಂತೆ
ವಿ. ಕೃ. ಗೋಕಾಕರ ಸಾಲುಗಳು ಸುಳಿದಾವು
"ಮೆರೆಯಬಂದ ಮಾನವನು ಮಗುವಾಗಿ ಮರಳುವನು"
ಅದು ನಾನು ಅಣುವಿಗಿಂತಲೂ ಅಣುವೆನ್ನುವಷ್ಟೇ ಸತ್ಯ
~ ಮಾಪ್ರಶಾಂತ

2 comments:

Anonymous said...

I don't have a kannada editor hence posting the comments in english.

Excellent anno pada kaDime aniseetu. tumba ishTa aaytu. The flow, the language,the concept , the theme ella chennagide.
idannu munduvarisi. devaru oLLEdu maadli. :-)

Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com