Tuesday, January 23, 2007

ಏಕಾಂಗಿ

ನನ್ನ ಇನ್ನೊಂದು ಹಳೆಯ ಕವನ -- ಏಕಾಂಗಿ

ಮತ್ತೊಂದು ಹಗಲು, ಮತ್ತೊಂದು ಇರುಳು
ತೆರೆದ ಪುಸ್ತಕದ ಹಾಳೆ ಮಗುಚಿದಂತೆ ಕಳೆಯಿತು
ಕಾಲಗಣನೆಯ ಚಿಂತೆ ನನಗಿಲ್ಲ
ಆಲೋಚನೆಗಳಲ್ಲಿ ಮುಳುಗಿರುವೆ, ಮನಸು ಏಕಾಂಗಿ

ಹಾದಿಯಲಿ ನಡೆವಾಗ ಪರಿಚಿತರಿಗಾಗಿ ಕಣ್ಣರಸುತ್ತದೆ
ಮುಖವಾಡದ ಕಪಟನಗೆ ಕಂಡು ಮನ ಮುದುಡುತ್ತದೆ
"ಇದಲ್ಲ ನಿನ ಜಾಗ, ಓಡೆಂದು" ಒಳಮನಸು ಚೀರುತ್ತದೆ
ಎಲ್ಲೇ ಹೋಗು ಅದೇ ಮುಖ, ಅದೇ ಕಪಟ ನಗೆ

ನಿನ್ನೆ ಇದ್ದವರು ಇಂದಿಲ್ಲ
ಇಂದಿರುವವರು ನಾಳೆ ಎಲ್ಲೊ
ಬಾಳೆಂಬ ಆಟದಲಿ ಎಲ್ಲರೂ ಏಕಾಂಗಿಗಳು
ನಾಲ್ಕುದಿನದ ಬದುಕಿನಲಿ ಜೊತೆಗಾರರ ಹುಡುಕಾಟವು

ಏಕಾಕಿತನದ ಆಲೋಚನೆಗಳ ನಡುವೆ
ಅಕ್ಕನ ಪುಸ್ತಕದ ಸಾಲುಗಳು ಅಣಕಿಸುತ್ತವೆ
"ಹಮ್ ಇಸ್ ದುನಿಯಾ ಮೆ ಆತೆ ಭಿ ಅಕೇಲೆ, ಔರ್ ಜಾತೆ ಭಿ ಅಕೇಲೆ
ಚಾರ್ ದಿನ್ ಕಿ ಇಸ್ ದುನಿಯಾ ಮೆ ಹಮ್ ಅಕೇಲೆ ಹಿ ಅಕೇಲೆ"
~ ಮಾಪ್ರಶಾಂತ

8 comments:

Anonymous said...

why so much smashaana vairaagya now itself ?
Go get married man :-)

Sushrutha Dodderi said...

ಕವನ ಹಳೆಯದಾದರೂ ವಿಷಯ ನಿತ್ಯನೂತನ. ಹಾಂ, ವೀಣಾರವರು ಹೇಳಿದಂತೆ, ಮದುವೆಯಾದರೆ ಇದಕ್ಕೊಂದು 'ಕ್ಷಣದ ಪರಿಹಾರ'ವಾದರೂ ದೊರಕಬಹುದೇನೋ? :)

Anonymous said...

Houdu. BahaLa gahanavaada vichaara . sushrutha avaru heLida haage Nithya noothana. Aadare "kshaNada parihaara" ommomme matthashtu "ekangi"yannaagi madibidutthade. adaralloo visheshavaagi "heNNu" makkaLannu.:(

ಬಾನಾಡಿ said...

ಒಂಟಿತನವೇ ಒಮ್ಮೊಮ್ಮೆ ನಮಗೆ ಹೊಸ ಲೋಕವನ್ನು ಪರಿಚಯಿತ್ತದೆ. ಜನಸಾಗರದ ಸಂತೆಯಲ್ಲಿದ್ದೂ ಒಂಟಿಯಾಗಿರುವುದು ನಮ್ಮನ್ನು ನಾವು ಕಾಣಲು ಮಾಡುವ ಒಂದು ಮುಹೂರ್ಥ!

veena said...

ಒಂಟಿತನದಲ್ಲಿಯೂ ಸುಖವಿದೆ....

Sridhar Raju said...

ನಮಸ್ಕಾರ ಪ್ರಶಾಂತ್ ಅವರೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ

Prasanna said...

Chennagide kavana. heege nimma baravanige chennagi nadeyali

Unknown said...

Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends