ಇಂದು ಪ್ರಶಾಂತ್ನ ಹುಟ್ಟುಹಬ್ಬ.
"ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪಚ್ಚಿ :)"
ಈ ಸಂದರ್ಭದಲ್ಲಿ ನಮ್ಮ
ತ.ವಿ.ಶ್ರೀನಿವಾಸ್ರ ಶುಭಸಂದೇಶವನ್ನು ಇಲ್ಲಿ ಹಾಕುತ್ತಿದ್ದೇನೆ. ಧನ್ಯವಾದಗಳು ಸಾರ್. :)
"ಇಂದು ಜನವರಿಯ ೨೬ನೇ ತಾರೀಖು. ಗಣರಾಜ್ಯೋತ್ಸವ ದಿನ. ಎಲ್ಲರಿಗೂ ಹರುಷ ತರುತ್ತಿರುವ ದಿನ. ಆದರಿನ್ನೂ ಹೆಚ್ಚಿನ ಸಂತಸದ ವಿಷಯ ಅಂದ್ರೆ ನಮ್ಮೆಲ್ಲರ ನಲ್ಮೆಯ ಮಿತ್ರರಾದ ಮಾ.ಪ್ರಶಾಂತರ ಜನುಮದ ದಿನ. ನಾವೆಲ್ಲರೂ ಅವರಿಗೆ ಶುಭಾಶಯವನ್ನು ಕೋರೋಣ."
ಕನ್ನಡಮ್ಮನ ಕುತ್ತಿಗೆಯಲಿಹುದು ಮುತ್ತಿನ ಹಾರ
ಆ ಹಾರದಲ್ಲೊಂದು ಪ್ರಜ್ವಲಿಪ ಮಾಣಿಕ್ಯ
ಆ ಮಾಣಿಕ್ಯದ ಜೊತೆಗಿನ್ನೊಂದು ಪುಟ್ಟ ಮುತ್ತು
ಹೆಮ್ಮೆಯಿಂದ ಬೀಗುತಿಹರು ಇದ ನಮಗಿತ್ತು
ಸಹಸ್ರಾರು ಮಕ್ಕಳಿಗೆ ದಾರಿ ದೀಪ ಆ ಮಾಣಿಕ್ಯ
ತೋರಲಿ ಕೋಟ್ಯಂತರ ಕನ್ನಡಿಗರಿಗೆ ದಾರಿ ಈ ಮುತ್ತು
ವಾಕ್ ಕಲಿಸಿದ ಮೊದಲ ಗುರು ವಾಗ್ದೇವಿ ಅಮ್ಮ
ಛಾಯಾಚಿತ್ರ ಸೆರೆ ಹಿಡಿಯುವುದರಲ್ಲಿ ಅಪ್ರತಿಮ
ಹೆಸರಿಸಲು ಬಾರದವರ ಬಾಯಲ್ಲಿ ಇವರು ಅಪಭ್ರಂಶ
ಹೆಸರಿಸಿಕೊಂಡರದಕೆ ಗಣಿತದ ಭಾಷಾ
ಟೆಸ್ಟಿಂಗ್ ಪ್ರವೀಣ ಈ ತಂತ್ರಾಂಶ ಅಭಿಯಂತ
ಸಾಹಿತ್ಯ ಸೇವೆಯಲೇನೂ ಕಡಿಮೆ ಇಲ್ಲದ ಪಂಡಿತ
ಸುಶೀಲರ ಜೊತೆಗೂಡಿ ನಡೆಸುತಿಹರು ಬ್ಲಾಗು
ಕನ್ನಡ ಅವಹೇಳನ ಮಾಡುವವಗೆ ಇವರ ಕೂಗು
ಇವರ ಹಿಡಿತದಲ್ಲಿಟ್ಟಿಹಳು ಆ ಬಾಸಮ್ಮ
ಸಾಹಿತ್ಯ ಭಂಡಾರದೊಡೆಯರು ಇವರ ಜನಕ
ವಾರಕ್ಕೊಮ್ಮೆ ಇವರ ಭೇಟಿ ಕುಣಿಗಲ್ಲಿಗೆ
ಮಾರು ಹೋಗಿಹರು ಹಳ್ಳಿಯ ಸೊಗಡಿಗೆ
ಛಾಯಾಚಿತ್ರದಲಿ ಸೆರೆ ಹಿಡಿದಿಹರು ಚಿಣ್ಣರ ಮುಗ್ಧ ಮುಖವ
ಕವನದಲಿ ಸೆರೆ ಹಿಡಿದಿಹರು ಕಾಣದಿರುವ ಆ ಮುಖವ
ಚೆನ್ನೈನ ಕಂಡಕ್ಟರನ್ನೊಮ್ಮೆ ಪ್ರದರ್ಶಿಸಿದರು
ಅಸುನೀಗಿದ ಪುಟ್ಟ ಕಂದಮ್ಮನ ಅಳಲು ತೋರಿದರು
ಇವರ ಕೈ ಇನ್ನೂ ಬಲಗೊಳ್ಳಲಿ ತಾಯ ಸೇವೆಗೆ
ನಾವೆಲ್ಲರೂ ಹಾರೈಸುವ ಇವರ ಸುದೀರ್ಘ ಆಯಸ್ಸಿಗೆ
ಆ ಸರ್ವಶಕ್ತನಲ್ಲಿ ನನ್ನ ಬೇಡಿಕೆ ಇವರಿಗೆ ಆಯುರಾರೋಗ್ಯ,
ಅಷ್ಟೈಶ್ವೈರ್ಯ, ಸುಖ ದು:ಖಗಳನ್ನು ಸಮನಾಗಿ
ಸ್ವೀಕರಿಸುವ ಶಕ್ತಿಯನ್ನಿತ್ತು ಕನ್ನಡ-ಕನ್ನಡಿಗರ
ಸೇವೆಯನ್ನು ಇನ್ನೂ ಹೆಚ್ಚಿನದಾಗಿ ಮಾಡುವಂತೆ ಮಾಡಲಿ ಎಂದು ಬೇಡುವೆ.
ನೂರ್ಕಾಲ ಬಾಳಲಿ ನಂಬಿದವರೆಲ್ಲರನೂ ಬದುಕಿಸಲಿ