Friday, December 30, 2005

ತೊದಲ್ನುಡಿ


ತೊದಲ್ನುಡಿ -
ರಾಷ್ಟ್ರಕವಿಯ ಜನ್ಮಶತಮಾನೋತ್ಸವದ ನೆನಪಾಗಿ ಅವರಿಗೇ ಅರ್ಪಿತ ಈ ನಮ್ಮ ಕನ್ನಡಕಸ್ತೂರಿ ಬ್ಲಾಗ್. ಅವರೇ ಹೇಳಿದಂತೆ "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದೂ ನೀ ಕನ್ನಡವಾಗಿರು"- ಇದು ನಮ್ಮ-ನಿಮ್ಮೆಲ್ಲರ ಮೂಲಮಂತ್ರವಾಗಲೆಂಬುದೇ ನಮ್ಮ ಆಶಯ.
ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಕ್ಕೋಸ್ಕರವೇ ಈ ನಮ್ಮ ಕಿರು ಪ್ರಯತ್ನ - "ಕನ್ನಡ ಕಸ್ತೂರಿ"

ಕುವೆಂಪುರವರ ಕವಿತೆ, ನಾಡಗೀತೆಯಿಂದಲೇ ಪ್ರಾರಂಭಿಸುತ್ತಿದ್ದೇವೆ ಈ ನಮ್ಮ ಕನ್ನಡದ ಕಿರು ಸೇವೆಯನ್ನು.

ಬನ್ನಿ ನೀವೂ ಕೈ ಜೋಡಿಸಿ...

ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ ಜಯ ಹೇ ರಸ ಋಶಿಗಳ ಬೀಡೆ
ಭೂ ದೇ"ಯ ಮಕುಟದ ನವ ಮಣಿಯೆ ಗಂಧದ ಚಣ್ದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ

ತೈಲಪ ಹೊಯ್ಸಳರಾಳಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ "ವೇಕರ ಭಾರತ ಜನನಿಯ ತನುಜಾತೆ

ಶಂಕರ ರಾಮಾನುಜ "ದ್ಯಾರಣ್ಯ ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಶಡಕ್ಷರಿ ಪೊನ್ನ ಪಂಪ ಲಕು"ಪತಿ ಜನ್ನ
ಕಬ್ಬಿಗನುದಿಸಿದ ಮಂಗಳ ಧಾಮ ಕ" ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ ಭಾರತ ಜನನಿಯ ತನುಜಾತೆ

ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ ಕನ್ನಡ ತಾಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೇ

-ಕುವೆಂಪು